August 13, 2019
“ಹಳೆಯ ಬೆಂಗಳೂರು ಶಾಂತಿಯುತ, ಹಸಿರಿನಿಂದ ಕೂಡಿದ, ಕೆರೆಗಳು, ಉದ್ಯಾನವನಗಳು, ಸಾಲುಮರಗಳನ್ನು ಒಳಗೊಂಡ ಆಕರ್ಷಕ ನಗರವಾಗಿತ್ತು. ಹೊಸ ಬೆಂಗಳೂರು ನಗರವು ಅವಕಾಶ, ಬೆಳವಣಿಗೆ ಮತ್ತು ಸಮೃದ್ಧಿಯ ನಗರವಾಗಿದೆ. ಬೆಂಗಳೂರು, ಉದ್ಯಾನವನಗಳು ಮತ್ತು ಕೆರೆಗಳ ಜೊತೆಗೆ ಸಮೃದ್ಧವಾದ ನಗರವಾಗಲಿ ಎಂದು ನಾನು ಎದುರುನೋಡುತ್ತಿದ್ದೇನೆ. ನಮಗೆ ಅವಕಾಶಗಳು ಬೇಕು, ಆದರೆ ಸಂತೋಷದ ವೆಚ್ಚದಲ್ಲಿ ಅಲ್ಲ. ನಮಗೆ ಬೆಳವಣಿಗೆಯು ಬೇಕು, ಆದರೆ ಆರೋಗ್ಯದ ವೆಚ್ಚದಲ್ಲಿ ಅಲ್ಲ.”
– ಕುಪೇಂದ್ರ ರೆಡ್ಡಿ
ಶ್ರೀ ಕುಪೇಂದ್ರ ರೆಡ್ಡಿಯವರು, ಬೆಂಗಳೂರು ಒಂದು ವಿಲಕ್ಷಣವಾದ ಉದ್ಯಾನ ನಗರ ಮತ್ತು ನಿವೃತ್ತಿ ವೇತನದಾರರ ಸ್ವರ್ಗವಾಗಿದ್ದ ವರ್ಷಗಳಿಂದ, ಈಗ 10 ಮಿಲಿಯನ್ ಜನಸಂಖ್ಯೆ ಹೊಂದಿರುವ ದೊಡ್ಡ ನಗರವಾಗಿ ಹೊರಹೊಮ್ಮುತ್ತಿರುವ ವಿಕಾಸಕ್ಕೆ ಸಾಕ್ಷಿಯಾದವರು. ಅವರು ಒಬ್ಬ ಬೆಂಗಳೂರಿಗನಾಗಿ, ನಗರ ಬೆಳೆಯುತ್ತಿರುವುದನ್ನು ಖಾತರಿಪಡಿಸಿಕೊಳ್ಳುತ್ತಲೇ ಅದೇ ಸಮಯದಲ್ಲಿ ಅದರ ವಿಶೇಷತೆಯನ್ನು ಉಳಿಸಿಕೊಳ್ಳುವುದರ ಪ್ರಯತ್ನದಲ್ಲಿ ತೊಡಗಿದ್ದಾರೆ.
ಭಾರತದಲ್ಲಿ ಮತ್ತು ವಿಶ್ವದಲ್ಲಿ ಕ್ರಿಯಾತ್ಮಕ ಮತ್ತು ಉನ್ನತ ನಗರಗಳಲ್ಲಿ ಒಂದಾಗಲು, ನಗರವು ಕ್ಷಿಪ್ರಗತಿಯಲ್ಲಿ ಮುಂದುವರಿಯುತ್ತಿರುವಾಗ, ನಗರದ ಬೆಳವಣಿಗೆ ಕೂಡ ಆ ದಿಸೆಯಲ್ಲಿದೆ ಎಂದು ಖಚಿತಪಡಿಸಿಕೊಳ್ಳಲು, ಸಂಚಾರ, ನೀರಿನ ಕೊರತೆ, ಕಸ ಮತ್ತು ಇತರ ಸಮಸ್ಯೆಗಳನ್ನು ಸರಿಪಡಿಸಲು ಸಂಬಂಧಿಸಿದಂತೆ ಸಾಕಷ್ಟು ಕಾರ್ಯಗಳನ್ನು ಇನ್ನೂ ಮಾಡಬೇಕಾಗಿದೆ ಎಂದು ಶ್ರೀ ರೆಡ್ಡಿಯವರು ನಂಬುತ್ತಾರೆ.

ನಮ್ಮ ಬೆಂಗಳೂರನ್ನು ನಾವು ಹೇಗೆ ಮತ್ತಷ್ಟು ಉತ್ತಮಪಡಿಸಬಹುದು?
ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.
ಕುಪೇಂದ್ರ ರೆಡ್ಡಿ ಅವರ ಬಗ್ಗೆ ಇನ್ನಷ್ಟು ತಿಳಿಯಿರಿ
D. Kupendra Reddy