ಗಮನಹರಿಸುವ ಕ್ಷೇತ್ರಗಳು

ಕುಪೇಂದ್ರ ರೆಡ್ಡಿ ಅವರು ಬೆಂಗಳೂರನ್ನು ಅಭಿವೃದ್ಧಿ ಹೊಂದಿರುವ ನಗರದ ಜೊತೆಗೆ ಸಾಕಷ್ಟು ಹಸಿರು, ಶುದ್ಧ ಕೆರೆಗಳು, ವಿಶಾಲವಾದ ರಸ್ತೆಗಳು ಮತ್ತು ಉತ್ತಮ ನಗರ ಯೋಜನೆ ಇರುವ ನಗರವನ್ನಾಗಿ ದೃಶ್ಯೀಕರಿಸುತ್ತಾರೆ. ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿರುವಂತ ಬೆಂಗಳೂರಿನ ಜನಸಂಖ್ಯೆಯು ಎರಡು ದಶಕಗಳಿಗಿಂತಲೂ ಕಡಿಮೆ ಅವಧಿಯಲ್ಲಿ ದ್ವಿಗುಣವಾಗಿದೆ. ಇದು ನಗರಕ್ಕೆ ಬೆಳವಣಿಗೆ, ಸಮೃದ್ಧಿ ಮತ್ತು ವೈವಿಧ್ಯತೆಯನ್ನು ತಂದಿದೆ ಆದರೆ ಅದರ ಜೊತೆಗೆ ಸಂಚಾರ ಅನುಪಯುಕ್ತವಾಗುತ್ತಿದೆ, ಹಸಿರು ಕವಚವು ಕಡಿಮೆಯಾಗುತ್ತಿದೆ, ಕೆರೆಗಳು ಕಣ್ಮರೆಯಾಗುತ್ತಿರುವುದರ ಜೊತೆಗೆ ಕಸದ ವಿಲೇವಾರಿಗಳಂತಹ ಸಮಸ್ಯೆಗಳಿಗೆ ಕಾರಣವಾಗಿದೆ.
ನಗರವು ಬೆಳೆಯುತ್ತಾ ಹೋದಂತೆ, ನಾವು ನಮ್ಮ ಕರ್ತವ್ಯವನ್ನು ಮಾಡುವ ಜವಾಬ್ದಾರಿಯನ್ನು ಹೊಂದುತ್ತೇವೆ. ಸಕ್ರಿಯ ನಾಗರೀಕತೆ ಮತ್ತು ಉತ್ತಮ ಯೋಜನೆ, ಭಾರತದಲ್ಲಿ ವಾಸಿಸಲು ಉತ್ತಮವಾದ ನಗರಗಳಲ್ಲಿ, ಬೆಂಗಳೂರು ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳುವಂತೆ ಮಾಡಲು ಇರುವ ಏಕೈಕ ಮಾರ್ಗವಾಗಿದೆ.

ಕೆರೆಗಳು

ಒಂದು ಸಮಯದಲ್ಲಿ, ಬೆಂಗಳೂರನ್ನು ಕೆರೆಗಳ ನಗರವೆಂದು ಕರೆಯಲಾಗುತ್ತಿತ್ತು. ನಗರೀಕರಣದಿಂದಾಗಿ ಬೆಂಗಳೂರಿನ ಸುಂದರ ಕೆರೆಗಳ ಮೇಲೆ ಭಾರೀ ಪ್ರಮಾಣದ ಬೆಲೆ ತೇಯಬೇಕಾಯಿತು. 1985 ರಲ್ಲಿ ಬೆಂಗಳೂರಿನಲ್ಲಿ 51 ಆರೋಗ್ಯಕರ ಕೆರೆಗಳಿದ್ದವು, ಈಗ ಕೇವಲ 17 ಕೆರೆಗಳಿವೆ. ಬೆಳ್ಳಂದೂರ್ ಕೆರೆಯಂತಹ ಕೆರೆಗಳ ಸುತ್ತಲಿನ ಸುಂದರವಾದ ಪರಿಸರ ವ್ಯವಸ್ಥೆಯನ್ನು ನೋಡಿರುವ ವ್ಯಕ್ತಿಗೆ ಈಗ ಬೆಂಗಳೂರಿನ ಕೆರೆಗಳ ಸಂಖ್ಯೆಯು ಕ್ಷೀಣಿಸುತ್ತಿರುವುದನ್ನು ನೋಡಲು ದುಃಖವನ್ನುಂಟು ಮಾಡುತ್ತಿದೆ.
ಪ್ರವಾಹದಿಂದ, ಸಸ್ಯ ಮತ್ತು ಪ್ರಾಣಿಗಳ ವೈವಿಧ್ಯತೆಯು ಕಡಿಮೆಯಾಗುವುದರಿಂದ ಹಲವಾರು ಅನಪೇಕ್ಷಿತ ಪರಿಣಾಮಗಳಾಗಿವೆ. ಅಲ್ಲದೆ, ಕೆರೆಗಳು ಸೌಂದರ್ಯದ ಒಂದು ಮೂಲವಾಗಿದೆ ಮತ್ತು ಅನಪೇಕ್ಷಿತ ನಗರ ಭೂದೃಶ್ಯಗಳಿಂದ ಕಣ್ಣಿಗೆ ಸ್ವಲ್ಪ ವಿಶ್ರಾಂತಿ ನೀಡುತ್ತದೆ. ಇದರ ಜೊತೆಗೆ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲವನ್ನು ಉತ್ತೇಜಿಸುವಲ್ಲಿ ಕೆರೆಗಳು ಪಾತ್ರವಹಿಸುತ್ತವೆ.
ಆದ್ದರಿಂದ, ನಮ್ಮ ಕೆರೆಗಳನ್ನು ಉಳಿಸುವುದು ನಮ್ಮ ಆದ್ಯತೆಯಾಗಿ ಇರಬೇಕು. ವೈಟ್ಫೀಲ್ಡ್ನಲ್ಲಿರುವ ಬೆಳ್ಳಂದೂರ್ ಕೆರೆಯು ಬೆಂಗಳೂರಿನ ಕೆರೆಗಳು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಪೋಸ್ಟರ್ ಚೈಲ್ಡ್ ಆಗಿ ಮಾರ್ಪಟ್ಟಿದೆ. ಕೆರೆಗಳನ್ನು ಸ್ವಚ್ಛಗೊಳಿಸಲು ಮತ್ತು ಕೆರೆಗಳನ್ನು ಕಲುಷಿತಗೊಳಿಸದಂತೆ ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಶ್ರೀ ರೆಡ್ಡಿ ಅವರು ಅರ್ಜಿಯನ್ನು ಸಲ್ಲಿಸಿದ್ದರು. ಅದು ಈಗಲೂ ನಡೆಯುತ್ತಿರುವ ಯುದ್ಧವಾಗಿದೆ.

ಮೂಲಸೌಕರ್ಯ

ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಯೋಜನೆಯು ಬೆಂಗಳೂರಿನಂತಹ ಬೆಳೆಯುತ್ತಿರುವ ನಗರಕ್ಕೆ ಪ್ರಮುಖ ಸವಾಲುಗಳಾಗಿವೆ. ಕುಪೇಂದ್ರ ರೆಡ್ಡಿ ಅವರ ಪ್ರಕಾರ ಸ್ಮಾರ್ಟ್ ಲ್ಯಾಂಡ್ ಪ್ಲಾನಿಂಗ್ ಜೊತೆಗೆ ಅನೇಕ ಸಂಪರ್ಕ ಮಾರ್ಗಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದುವುದರಿಂದ ಈ ಸವಾಲುಗಳನ್ನು ಜಯಿಸಲು ಮತ್ತು ಬೆಂಗಳೂರನ್ನು ನಿಜವಾದ ಸ್ಮಾರ್ಟ್ ನಗರವನ್ನಾಗಿ ಮಾಡಲು ಇವು ಕೆಲವು ಮಾರ್ಗಗಳಾಗಿವೆ ಎಂದು ನಂಬುತ್ತಾರೆ.

ಇದಲ್ಲದೆ, ನಗರದ ಬೆಳೆಯುತ್ತಿರುವ ಅಗತ್ಯತೆಗಳನ್ನು ಪೂರೈಸಲು ಪರಿಣಾಮಕಾರಿ ನೀರಿನ ನಿರ್ವಹಣೆಯ ಅಗತ್ಯವಿರುತ್ತದೆ. ಕುಪೇಂದ್ರ ರೆಡ್ಡಿ ಅವರು, ಮಳೆನೀರು ಕೊಯ್ಲು ಮುಂತಾದ ಜಲ ಸಂರಕ್ಷಣೆ ಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಮತ್ತು ಅವರ ಹಲವು ಮೂಲಸೌಕರ್ಯ ಯೋಜನೆಗಳಲ್ಲಿ ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡಿದ್ದಾರೆ. ಈ ಮಾದರಿಯನ್ನು ದೊಡ್ಡ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವುದರಿಂದ ನಮ್ಮ ಬೆಂಗಳೂರಿನಲ್ಲಿನ ನೀರಿನ ಬಿಕ್ಕಟ್ಟನ್ನು ಜಯಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಅವರು ದೃಢವಾಗಿ ನಂಬುತ್ತಾರೆ.

ಕಸ ನಿರ್ವಹಣೆ

ಬೆಂಗಳೂರಿನ ಬೆಳವಣಿಗೆಯ ಜೊತೆಗೆ ಪ್ರತಿ ದಿನವೂ ಉತ್ಪತ್ತಿಯಾಗುತ್ತಿರುವ ಕಸದ ಪ್ರಮಾಣದಲ್ಲಿಯು ಭಾರೀ ಬೆಳವಣಿಗೆಯಾಗಿದೆ. ಕೆಲವು ವರದಿಗಳ ಪ್ರಕಾರ, 2000-01 ರಲ್ಲಿ ನಗರವು ಉತ್ಪಾದಿಸುತಿದ್ದ ಕಸವು ದಿನಕ್ಕೆ 200 ಟನ್ನುಗಳಷ್ಟು ಪ್ರಮಾಣದಲ್ಲಿತ್ತು, ಆದರೆ ಈಗ 2017 ರಲ್ಲಿ ದಿನಕ್ಕೆ 3700 ಟನ್ನುಗಳಷ್ಟು ಬೃಹತ್ ಪ್ರಮಾಣವನ್ನು ತಲುಪಿದೆ. ಇದು ಇಪ್ಪತ್ತು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 1,750% ನಷ್ಟು ಬೆಳವಣಿಗೆಯಾಗಿದೆ. ಈ ಬೃಹತ್ ಪ್ರಮಾಣದ ಜಿಗಿತಕ್ಕೆ ಹಲವಾರು ಕಾರಣಗಳಿವೆ.

ಕುಪೇಂದ್ರ ರೆಡ್ಡಿ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ವಿವಿಧ ಸಮರ್ಥನೀಯ ತ್ಯಾಜ್ಯ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಂಡಿದ್ದಾರೆ, ಅದರ ಜೊತೆಗೆ ಅವರ ಮೂಲಸೌಕರ್ಯ ಯೋಜನೆಗಳಾದ ಕಾಂಪೋಸ್ಟಿಂಗ್, ತ್ಯಾಜ್ಯ ಪ್ರತ್ಯೇಕತೆ, ಮರುಬಳಕೆ ಇತ್ಯಾದಿಗಳನ್ನು ಕೂಡ ಅವರು ಅನುಷ್ಠಾನಗೊಳಿಸಿದ್ದಾರೆ. ಒಬ್ಬ ವ್ಯಕ್ತಿಯ ಮಟ್ಟದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಕ್ಕೆ ನಾವು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದರೆ, ಬಹುತೇಕ ನಮ್ಮ ತ್ಯಾಜ್ಯ ನಿರ್ವಹಣೆ ಸಮಸ್ಯೆಗಳನ್ನು ಪರಿಹರಿಸಬಹುದಾಗಿದೆ.

ನಗರ ಯೋಜನೆ

ಬೆಳೆಯುತ್ತಿರುವ ಯಾವುದೇ ನಗರಕ್ಕೆ, ಯೋಜನೆ ಮತ್ತು ಆಡಳಿತವು ಅಂತರ್ಗತವಾಗಿ ಸಂಬಂಧ ಹೊಂದಿದೆ. ಭೂ ಪ್ರದೇಶದ ವಲಯದಲ್ಲಿ ವಿಶೇಷವಾಗಿ ಹೊಸ ಕ್ಷೇತ್ರಗಳಲ್ಲಿ ಮತ್ತು ವಿನ್ಯಾಸದಲ್ಲಿ ಉತ್ತಮ ಚಿಂತನೆ ಪ್ರಕ್ರಿಯೆ ಇರಬೇಕು.
ಕುಪೇಂದ್ರ ರೆಡ್ಡಿಯವರು ಬೆಂಗಳೂರು ಸೂಕ್ತವಾದ ಯೋಜನೆಯನ್ನು ಮತ್ತು ಉತ್ತಮ ಸಂಪರ್ಕವನ್ನೂ ಹೊಂದಿ, ಉತ್ತಮ ಜೀವನಕ್ಕಾಗಿ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕೂಡ ಹೊಂದಿರಬೇಕು ಎನ್ನುವ ದೃಷ್ಟಿಯನ್ನು ಹೊಂದಿದ್ದಾರೆ. ರಾಜ್ಯಸಭೆಯ ಸಂಸದರಾಗಿ ಅವರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಮತ್ತು ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಹಲವು ಪತ್ರಗಳನ್ನು ಬರೆದಿದ್ದಾರೆ, ಇದರಿಂದಾಗಿ ಬೆಂಗಳೂರಿನ ನಾಗರಿಕರು ಎದುರಿಸುತ್ತಿದ್ದ ಹಲವು ಸಮಸ್ಯೆಗಳನ್ನು ಯಶಸ್ವಿಯಾಗಿ ಪರಿಹರಿಸಿದ್ದಾರೆ.

ನೀವು ಅಪ್‍ಡೇಟ್‍ಗಳನ್ನು ಪಡೆಯಲು ಬಯಸುತ್ತೀರಾ?