ರಾಜಕಾರಣಿಯಾಗಿ ಕುಪೇಂದ್ರ ರೆಡ್ಡಿ

ಹಲವಾರು ವರ್ಷ ಜನಸಾಮಾನ್ಯರೊಂದಿಗೆ ಬೆರೆತು ರಾಜಕೀಯ ವಲಯದಲ್ಲಿ ಜನರಿಗೆ ಕೇಂದ್ರೀಕರಿಸಿದ ಸೇವೆ ಸಲ್ಲಿಸಿದ ನಂತರ, ಕುಪೇಂದ್ರ ರೆಡ್ಡಿಯವರು 2014ರಲ್ಲಿ ರಾಜ್ಯ ಸಭೆಗೆ ಚುನಾಯಿತರಾಗಿದ್ದರು 2020ಯ ತನಕ. ರಾಜ್ಯ ಸಭೆಯ ಒಬ್ಬ ಹೆಮ್ಮೆಯ ಸದಸ್ಯನಾಗಿ, ತಮ್ಮ ಹುದ್ದೆಯಲ್ಲಿ ಸಾರ್ವಜನಿಕ ಸೇವೆಯ ಬದ್ದತೆಯನ್ನು ಇನ್ನು ಹೆಚ್ಚುಗೊಳಿಸುವುದು ಅವರ ನಿರಂತರ ಪ್ರಯತ್ನವಾಗಿದೆ.

ರಾಜಕೀಯ ಪಯಣ

ಕರ್ನಾಟಕ ರಾಜಕೀಯದಲ್ಲಿ ರೆಡ್ಡಿಯವರು ಪ್ರಮುಖ ಪಾತ್ರ ವಹಿಸಿದ್ದಾರೆ. ೨೦೧೮ರಲ್ಲಿ ಮೈತ್ರಿ ಸರ್ಕಾರದ ರಚನೆಯಲ್ಲಿ ನಡೆದ ಸಂದಾನದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ೨೦೧೯ ಜನವರಿಯಿಂದ ಇವರು ಬೆಂಗಳೂರು ನಗರ ಹಾಗು ಗ್ರಾಮೀಣ ಜಿಲ್ಲೆಗಳ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.

ರಾಜ್ಯಸಭಾ ಸದಸ್ಯರಾಗಿ

ರಾಜ್ಯ ಸಭೆಯಲ್ಲಿ ರೆಡ್ಡಿಯವರು ಅತ್ಯಂತ ಸಕ್ರಿಯ ಸದಸ್ಯರಾಗಿದ್ದು, ಕೃಷಿ ಮತ್ತು ರೈತರ ಕಲ್ಯಾಣ, ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗು ಹಣಕಾಸಿನಂತಹ ಸಮಂಜಸ ವಿಷಯಗಳ ಬಗ್ಗೆ ೬೨೮ ಪ್ರಶ್ನೆಗಳನ್ನು ಸಂಸತ್ತಿನಲ್ಲಿ ಕೇಳಿದ್ದಾರೆ. ವಿವಿಧ ಸಚಿವಾಲಯಗಳು ಹಾಗು ಅಧಿಕಾರವರ್ಗದವರೊಡನೆ ಸತತವಾಗಿ ಪತ್ರಗಳ ಮೂಲಕ ಸಂಪರ್ಕದಲ್ಲಿದ್ದರು. ಅವರು ವಿದೇಶಾಂಗ ವ್ಯವಹಾರಗಳು ಮತ್ತು ನಿಯಮಗಳ ಸಮಿತಿಯ ಸದಸ್ಯರು ಕೂಡ ಆಗಿದ್ದರು.

ಉತ್ತಮ ಬೆಂಗಳೂರಿಗಾಗಿ ಡಿ ಕುಪೇಂದ್ರ ರೆಡ್ಡಿಯವರನ್ನು ಸೇರಿಕೊಳ್ಳಿ